ಜ್ಞಾನಸಿಂಧು ಅಂದಮಕ್ಕಳ ವಸತಿ ಶಾಲೆಯ ಅಂದ ವಿದ್ಯಾರ್ಥಿಗಳಿಗೆ ಪಾನಘಂಟಿ ಫೌಂಡೇಶನ್ ವತಿಯಿಂದ ಸ್ವೇಟರ್ ವಿತರಣೆ
ಗದಗ : ಜಿಲ್ಲೆಯ ಹೊಳೆ ಆಲೂರಿನ ಜ್ಞಾನಸಿಂಧು ಅಂದಮಕ್ಕಳ ವಸತಿ ಶಾಲೆಯಲ್ಲಿರುವ 85 ಕ್ಕೂ ಹೆಚ್ಚು ಅಂದ ವಿದ್ಯಾರ್ಥಿಗಳಿಗೆ ಕೊಪ್ಪಳದ ಪಾನಘಂಟಿ ಪೌಂಡೇಶನ್ ಭಾಗ್ಯನಗರ ಹಾಗೂ ವಾಸವಿ ಕ್ಲಬ್ ಭಾಗ್ಯನಗರ ವತಿಯಿಂದ ಸ್ವೇಟರ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾರದಾ ಪಾನಘಂಟಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ನಿಜವಾದ ದೇವರು ಎಂದರೆ ಅಂದ ಮಕ್ಕಳು.ಕಣ್ಣಿಲ್ಲದಿದ್ದರೂ ನವ ಸಮಾಜದ ಕನಸು ಕಟ್ಟಿಕೊಂಡವರು.ಯಾವುದೇ ತಾತ್ಸಾರ-ಅಸೂಹೆ ಮನೋಭಾವ ಇಲ್ಲದೆ ತಮ್ಮ ಪ್ರತಿಭೆಯ ಮೂಲಕವೇ ಬೆಳಕಾದವರು.ಇಂತವರಿಗೆ ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಕೈಲಾದಮಟ್ಟಿಗೆ ಸಹಾಯ ಮಾಡಲು ಅವಕಾಶ ಒದಗಿದ್ದು ನಮ್ಮ ಪುಣ್ಯ ಎಂದರು.
ಸಂಸ್ಥೆಯ ಸಂಸ್ಥಾಪಕರು ಹಾಗೂ ಅಂದ ಮಕ್ಕಳಪಾಲಿನ ಕರುಣಾಮಯಿಯಾದ ತುಳಸಮ್ಮ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಜ್ಞಾನಸಿಂದು ಅಂದ ವಿದ್ಯಾರ್ಥಿಗಳು ಯೋಗ,ಸಂಗೀತ ಮತ್ತು ಮಲ್ಲಗಂಬ ಪ್ರದರ್ಶನ ಮಾಡುವ ಮೂಲಕ ಎಲ್ಲರ ಮನಗೆದ್ದರು.ವಿಶೇಷ ಕೌಶಲ್ಯ ಹಾಗೂ ಪ್ರತಿಭೆಯ ಮೂಲಕ ಗುರುತಿಸಿಕೊಂಡ ಅಂದ ವಿದ್ಯಾರ್ಥಿಗಳು ಬ್ರೈಲ್ ಲಿಪಿ ವಿದ್ಯಾಬ್ಯಾಸ ಹಾಗೂ ದಿನನಿತ್ಯದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೂ ಸ್ವೇಟರ್ ವಿತರಿಸಿ ಸಿಹಿ ಹಂಚಿ ಮಾತೃ ಭೋಜನ ಮಾಡಿಸಲಾಯಿತು.
ಇದೇ ವೇಳೆ ವಾಸವಿ ಕ್ಲಬ್ ನ ಕಾರ್ಯದರ್ಶಿಗಳಾದ ಲಕ್ಷ್ಮೀ ಪಾನಘಂಟಿ ಮಹಿಳಾ ಧ್ವನಿ ಸಂಸ್ಥೆಯ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ,ಸಾಹಿತಿ ಡಾ.ಬಿ.ಎನ್.ಹೊರಪೇಟಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು.