*ಹರೀಶ್ ಪೂಂಜಾ ಸಮಾಜವನ್ನು ಒಡೆಯುತ್ತಿದ್ದಾರೆ*
*:ವೆಲ್ಫೇರ್ ಪಾರ್ಟಿ*
“ಹಿಂದುಗಳ ತೆರಿಗೆ ಹಣ ಹಿಂದುಗಳ ಅಭಿವೃದ್ಧಿ ಗೆ ಮಾತ್ರವೇ ಬಳಸಬೇಕು” ಎನ್ನುವ ಮೂಲಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ತನ್ನ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಅಜ್ಞಾನದಿಂದ ಭಾರತೀಯ ರನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.
ಹರೀಶ್ ಪೂಂಜಾರವರಿಗೆ ಪ್ರಜಾಪ್ರಭುತ್ವ ದ ಕುರಿತು ಪಾಠ ಮಾಡಿ ನಮ್ಮ ಸಂವಿಧಾನದ ಮಹತ್ವದ ಬಗ್ಗೆ ಅರ್ಥೈಸಬೇಕು. ಭಾರತದ ಬಹುತ್ವದ ಸಂಸ್ಕೃತಿಗಳ ಭಾವೈಕ್ಯದ ಬಗೆಗೆ ಇರುವ ಅರಿವಿನ ಕೊರತೆಯೇ ಇಂತಹ ಹೇಳಿಕೆಗಳಿಗೆ ಕಾರಣ. ಕೋಮು ಅಮಲು ಮಾತ್ರ ತಲೆಯಲ್ಲಿ ತುಂಬಿ ಇತರರನ್ನು ತುಚ್ಚೀಕರಿಸಿ ಸಮಾಜ ಒಡೆಯುವಂತಹ ರಾಜಕಾರಣಿಗಳು ದೇಶಕ್ಕೆ ಅಪಾಯಕಾರಿ. ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ತತ್ವವನ್ನು ಅರ್ಥೈಸಿ ಸಾಮರಸ್ಯದ ಸಹಬಾಳ್ವೆ ಯ ಭಾರತದ ನಿರ್ಮಾಣಕ್ಕೆ ಪ್ರಯತ್ನಿಸಲಿ”ಎಂದು ಅವರು ಹೇಳಿದರು.