*ಇಲಕಲ್ ಅಂಜುಮನ್ ಎ ಇಸ್ಲಾಂ: ಪ್ರಜಾಪ್ರಭುತ್ವಾತ್ಮಕ ಚುನಾವಣೆಯತ್ತ ಬೃಹತ್ ಹೆಜ್ಜೆ!*
ಬಾಗಲಕೋಟೆ :
ಇಲಕಲ್ ನಗರದಲ್ಲಿ ಅಂಜುಮನ್ ಎ ಇಸ್ಲಾಂ ಆಡಳಿತ ಮಂಡಳಿಯ ಅನುಮೋದನೆಗಾಗಿ ನಡೆದ ಬೆಳವಣಿಗೆಗಳು ಇತ್ತೀಚೆಗೆ ಭಾರೀ ಚರ್ಚೆಗೆ ಕಾರಣವಾಗಿದ್ದವು. ಮಾಜಿ ಅಧ್ಯಕ್ಷ ಉಸ್ಮಾನ್ಗಣಿ ಹುಮನಾಬಾದ್ ಅವರ ಅಧಿಕಾರಾವಧಿ10/3/2025 ರಂದು ಮುಕ್ತಾಯಗೊಂಡು, ತಾತ್ಕಾಲಿಕವಾಗಿ ಮೂರು ತಿಂಗಳ ಅವಧಿಗೆ ಮುಂದುವರಿಸಲಾಗಿತ್ತು. ಆ ಅವಧಿಯೂ 30/06/2025 ರಂದು ಕೊನೆಗೊಂಡಿದೆ.

ಆದರೂ, ಕಳೆದ ವಾರ, ಬೆಂಗಳೂರಿನ ಕೆಲ ಹಿರಿಯ ನಾಯಕರ ಭೇಟಿಗೆ ತೆರಳಿದ ನಿಯೋಗವು ಇನ್ನೂ ಮೂರು ತಿಂಗಳ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದು, ತಮ್ಮ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸಿ, ಸುದೀರ್ಘ ಪ್ರಚಾರ ನಡೆಸಿದೆ. ಈ ಎಲ್ಲಾ ಬೆಳವಣಿಗೆಗಳು ಸಮುದಾಯದ ಸತ್ಯ ನಿರೀಕ್ಷೆಗೆ ವಿರುದ್ಧವಾಗಿದ್ದವು.

ಈ ಹಿನ್ನೆಲೆಯಲ್ಲಿ, ಪ್ರತಿಪಕ್ಷದ ಪದಾಧಿಕಾರಿಗಳು ದರ್ಗಾ ಹಜರತ್ ಮುರ್ತುಜಾ ಶಾ ಖಾದ್ರಿ (ರ.ಅ) ಸಮಿತಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಪೂರಕ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ನಸೀರ ಅಹಮ್ಮದ್ ಅವರಿಗೆ ಸಲ್ಲಿಸಿದ್ದು, ಅವರು ತಕ್ಷಣ ಸ್ಪಂದಿಸಿ ಸಂಬಂಧಿತ ಇಲಾಖೆಗೆ ಕ್ರಮಕ್ಕೆ ಸೂಚನೆ ನೀಡಿರುವುದು ಸಮುದಾಯದ ಹಿತದೃಷ್ಟಿಯಿಂದ ಮಹತ್ವಪೂರ್ಣ ಬೆಳವಣಿಗೆಯಾಗಿದೆ.

ಈ ಮೂಲಕ, ವ್ಯಕ್ತಿಗತ ನಡೆಯುತ್ತಿದ್ದ ಅಧಿಕಾರದ ದುರುಪಯೋಗಕ್ಕೆ ತಡೆ ಒಡ್ಡುತ್ತಾ, ವಕ್ಫ್ ಮಂಡಳಿಯ ನಿಯಮಾನುಸಾರವಾಗಿ 2017ರ ಮಾದರಿ ಬೈಲಾ ನ್ನು ಅನುಸರಿಸಿ, 18 ವರ್ಷ ಮೀರಿದ ಪ್ರತಿಯೊಬ್ಬ ಮುಸ್ಲಿಂ ಪುರುಷರಿಗೆ ಮತದಾನದ ಹಕ್ಕು ಒದಗಿಸಿ ಹೊಸ ಆಡಳಿತ ಮಂಡಳಿ ರಚನೆ ಮಾಡಲು ಈಗಾಗಲೇ ಕ್ರಮ ಆರಂಭವಾಗಿದೆ.

ಇದು ಕೇವಲ ಆಯ್ಕೆಯ ವಿಚಾರವಲ್ಲ. ಇದು ಸಮುದಾಯದ ಧರ್ಮಾಧಿಕಾರ, ಆಸ್ತಿ ನಿರ್ವಹಣೆ ಮತ್ತು ಜವಾಬ್ದಾರಿಯ ಪಾರದರ್ಶಕತೆಗೆ ಸಂಬಂಧಿಸಿದ ಪ್ರಮುಖ ದಿಕ್ಕು ತೋರಿಸುವ ಬೆಳಕು. ಹೀಗಾಗಿ, ಇಲಕಲ್‌ನ ಪ್ರತಿಯೊಬ್ಬ ಜಾಗೃತ ನಾಗರಿಕನು ಈ ಸಮಿತಿಯ ರಚನೆಗೆ ಸಕ್ರಿಯವಾಗಿ ಭಾಗವಹಿಸಬೇಕೆಂದು ವಿನಂತಿಸುತಿಸಲಾಗಿದೆ.
*ಭ್ರಷ್ಟಾಚಾರ ವಿರೋಧಿ, ಅನ್ಯಾಯದ ವಿರುದ್ಧ ಹೋರಾಟ — ನವಶಕ್ತಿ ಸಮುದಾಯದ ಕಡೆಗೆ ಹೆಜ್ಜೆ ಹಾಕಿ ಎಂದರು.
.

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!