ಮುಸ್ಲಿಮರ ವಿರುದ್ಧ ದ್ವೇಷ ಹರಡಿಸಿಸುವ “ಉದಯಪುರ ಫೈಲ್” ಚಿತ್ರ ಪ್ರದರ್ಶನ ತಡೆ ಹಿಡಿಯಲು ಆಗ್ರಹ

ಕೊಪ್ಪಳ ಜೂಲೈ 9, ಸಮಾಜದಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಮುಸ್ಲಿಮ ರ ವಿರುದ್ಧ ದ್ವೇಷ ಹರಡಿಸುವ ಚಲನ ಚಿತ್ರ “ಉದಯಪುರ ಫೈಲ್” ಆಗಿದೆ ಎಂದು ಆರೋಪಿಸಿ ಪ್ರದರ್ಶನವನ್ನು ಸರಕಾರ ಕೂಡಲೇ ತಡೆ ಹಿಡಿಯಬೇಕು ಎಂದು ಆಲ್ ಇಂಡಿಯಾ ಉರ್ದು ವೆಲ್ಫೇರ್ ಡೆವಲಪ್ಮೆಂಟ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರಿನ ಅಧ್ಯಕ್ಷರಾದ ಕಲಬುರಗಿಯ ಜೈಬಾ ತಬಸುಮ್ ಆಗ್ರಹ ಪಡಿಸಿದಾರೆ.
ಸದರಿ ಚಲನ ಚಿತ್ರದಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಂರ ವಿರುದ್ಧ ದ್ವೇಷ ಮತ್ತು ವಿಷ ಬೀಜ ಬಿತ್ತುವ ಸನ್ನಿವೇಶಗಳು ಉದ್ದೇಶಪೂರಕವಾಗಿ ತೋರಿಸಲಾಗಿದೆ ಎಂದು ಆರೋಪಿಸಿದ ಅವರು ಅಲ್ಲದೆ ನಮ್ಮ ಭಾರತದ ಸಂವಿಧಾನ ಮತ್ತು ಕಾನೂನಿನ ಬಗ್ಗೆ ಅದರ ವಿರುದ್ಧವಾಗಿ ಕೆಲವು ಸನ್ನಿವೇಶಗಳು ಕೂಡ ಇದರಲ್ಲಿ ಕಂಡು ಬರುತ್ತಿವೆ ಎಂದು ಆರೋಪ ಮಾಡಿದ್ದಾರೆ,ಅಲ್ಲದೆ ಗ್ಯಾನ ವ್ಯಾಪಿ ಮಸೀದಿಯ ಪ್ರಕರಣದ ಬಗ್ಗೆ ತಪ್ಪು ಸಂದೇಶ ತೋರಿಸಲಾಗುತಿದೆ, ಮುಸ್ಲಿಂ ಸಮಾಜದ ಮೌಲ್ವಿ ಗಳನ್ನು ಭಯೋತ್ಪಾದಕರಂತೆ ಚಲನಚಿತ್ರದಲ್ಲಿ ಬಿಂಬಿಸಲಾಗುತಿದೆ ಇಸ್ಲಾಂ ಧರ್ಮದ ದಾರುಲ್ ಉಲುಮ್ ಮತ್ತು ದೇವಬಂಧ್ ಸಂಸ್ಥೆಗಳಿಗೆ ಭಯೋತ್ಪಾದಕರ ಕೇಂದ್ರ ಎಂದು ಉದ್ದೇಶಪೂರಕ ಆಗಿ ಸಮಾಜದಲ್ಲಿ ಅಶಾಂತಿ ಉದ್ಭವಿಸುವಂತೆ ತೋರಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿವೆ, ಹಜರತ ಆಯಿಷಾ ಸಿದ್ದಿಕಾ (ರ ) ರವರ ಕುರಿತು ಅವಹೇಳನ ಮಾಡಲಾಗಿದೆ ಎಂದು ಸಹ ಅವರು ಆರೋಪ ಮಾಡಿದ್ದಾರೆ,ಇಂತಹ ಚಲನಚಿತ್ರ ಪ್ರದರ್ಶನಗೊಂಡು ಸಮಾಜದಲ್ಲಿ ಜನಸಾಮಾನ್ಯರಲ್ಲಿ ಅಶಾಂತಿ ಉಂಟು ಮಾಡಿದಂತಾಗುತ್ತದೆ ಸದರಿ ಚಲನಚಿತ್ರ ಜೂಲೈ 11 ರಿಂದ ಪ್ರದರ್ಶನ ಗೊಳ್ಳಲು ಸಿದ್ದ ವಾಗಿದ್ದು ಕೂಡಲೇ ಚಿತ್ರ ಬಿಡುಗಡೆ ಪ್ರಕ್ರಿಯೆವನ್ನು ತಡೆ ಹಿಡಿಯಬೇಕು ಎಂದು ಕರ್ನಾಟಕ,ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ಆಲ್ ಇಂಡಿಯಾ ಉರ್ದು ವೆಲ್ಫೇರ್ ಡೆವಲಪ್ಮೆಂಟ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ನ ಅಧ್ಯಕ್ಷರಾದ ಕಲಬುರ್ಗಿಯ ಜೇಬಾ ತಬಸುಮ್ ಆಗ್ರಹ ಪಡಿಸುತ್ತಾರೆ.

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!