ಹಜರತ ಸೈಯ್ಯದ ಶಾಹ ಮುರ್ತುಜಾ ಖಾದರಿಯವರ 155 ನೇ ಉರುಸು : ಪತ್ರಕರ್ತರನ್ನು ನಿರ್ಲಕ್ಷಿಸಿದ ಆಡಳಿತಾಧಿಕಾರಿ ಮತ್ತು ಸಲಹಾ ಸಮೀತಿ..
ಬಾಗಲಕೋಟೆ : ಇಳಕಲ್ ನಗರದ ಆರಾದ್ಯ ದೈವ ಸರ್ವ ಜನಾಂಗದ ಭಾವೈಕ್ಯತೆಗೆ ಇನ್ನೊಂದು ಹೆಸರೇ ಹಜರತ ಸೈಯ್ಯದ ಶಾಹ ಮುರ್ತುಜಾ ಖಾದರಿ ಉರುಸು.
ಇಲ್ಲಿ ಹಿಂದಿನ ಆಡಳಿತ ಮಂಡಳಿಯ ವಿರುದ್ದ ಕೋರ್ಟ ಮೊರೆ ಹೋದ ಭಕ್ತರ ಸಮೂಹ, ಕಾರಣ ಕೋರ್ಟ ಈ ಬಾರಿ ಇಳಕಲ್ ತಾಲ್ಲೂಕಿನ ದಂಡಾಧಿಕಾರಿಯವರಿಗೆ ಮುರ್ತುಜಾ ಖಾದರಿಯವರ ದರ್ಗಾದ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಆದೇಶ ನೀಡಿದ್ದು ಸ್ವಾಗತಾರ್ಹ . ಅವರು ದರ್ಗಾದ ಮುಸ್ಲಿಂ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಸಲಹಾ ಸಮೀತಿ ಮಂಡಳಿಯನ್ನು ನೇಮಕ ಮಾಡಿಕೊಂಡು ಪೂಜ್ಯರ ಗಂಧ, ಉರುಸು, ಜಿಯಾರತ ಮುಸ್ಲಿಂ ಧಾರ್ಮಿಕ ವಿಧಾನಗಳನ್ವಯ ನೆರವೇಸಲಿ ಅದಕ್ಕೆ ಯಾರ ತಕರಾರು ಇಲ್ಲಾ..
ಆದರೆ ಇಲ್ಲಿನ ಆಡಳಿತಾಧಿಕಾರಿಯವರು ಹಿರಿಯ ಮತ್ತು ಸ್ಥಳೀಯ ಪತ್ರಕರ್ತರಿಗೆ ದರ್ಗಾ ಒಳಗಡೆ ಪ್ರವೇಶ ನಿಷೇಧಿಸಿ ಅಗೌರವ ತೋರಿಸಿದ್ದು ಖಂಡನೀಯ.. ಇದಕ್ಕೆ ನೂತನವಾಗಿ ನಿಯೋಜಿಸಿರುವ ಸಲಹಾ ಸಮೀತಿಯವರು ಗೊತ್ತಿದ್ದು , ಕಣ್ಣಿದ್ದು ಕುರುಡರಾಗಿ ನಾಟಕೀಯ ಬೆಳವಣಿಗೆ ನಡೆದಿದ್ದಂತು ಸತ್ಯ…
ಯಾವ ಮಾನ ದಂಡದಲ್ಲಿ ಪತ್ರಕರ್ತರನ್ನು ದೂರವಿಟ್ಟರು ಯಾಕೆ ಎಂಬ ಪ್ರಶ್ನೆ ನಿಗೂಢವಾಗಿದೆ..ಮತ್ತೊಂದೆಡೆ
ತಲೆ ತಲಾಂತರದಿಂದಲೂ ಪೂಜ್ಯರ ಗಂಧ, ಉರುಸು, ಜಿಯಾರತ ಧಾರ್ಮಿಕ ವಿಧಿ ವಿಧಾನಗಳನ್ನು ಪೂಜ್ಯರ ವಂಶಸ್ತರೆ ಮಾಡಿಕೊಂಡು ಬಂದಿರುವದು ಎಲ್ಲರಿಗೂ ತಿಳಿದ ಸಂಗತಿ.
ಆಡಳಿತಾಧಿಕಾರಿಯವರು ದರ್ಗಾದ ಪೀಠಾಧಿಕಾರಿಗಳಿಗಳಿಗೆ ಹೊರಗಡೆ ನಿಲ್ಲಿಸಿ ಗಂಧದ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ್ದು ಭಕ್ತರ ಸಮೂಹದಲ್ಲಿ ಆಕ್ರೊಶಕ್ಕೆ ಕಾರಣವಾಗಿದೆ. ಈ ಘಟನೆಯಿಂದ ಬೆಳಿಗ್ಗೆ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು..ಪೋಲಿಸ್ ಇಲಾಖೆಯವರು ಮಧ್ಯಸ್ತಿಕೆ ವಹಿಸಿ ಕೆಲ ಹಿರಿಯರ ಸಮ್ಮುಖದಲ್ಲಿ ತಿಳಿಗೊಳಿಸಿದರು..ಪೂಜ್ಯರ ಉರುಸು ಸುಗಮವಾಗಿ ಶಾಂತಿಯಿಂದ ನಡೆಯಲಿ ಎಂದು ದರ್ಗಾದ ಪೀಠಾಧಿಪತಿಗಳ ಭಕ್ತರ ಸಮೂಹ ಶಾಂತಿ ಮಾಡಿದ್ದಾರೆ..
ಇಳಕಲ್ ತಾಲ್ಲೂಕಿನ ದಂಡಾಧಿಕಾರಿಗಳು , ಮುರ್ತುಜಾ ಖಾದರಿ ದರ್ಗಾದ ಆಳಿತಾಧಿಕಾರಿಯವರಿಗೆ ಮತ್ತು ನಿಯೊಜನೆಗೊಂಡ ಸಲಹಾ ಸಮೀತಿಯವರಿಗೆ ಅವರ ಜವಾಬ್ದಾರಿಗಳು ಏನು ಎಂಬುದನ್ನು ತಿಳಿಸುವದಲ್ಲದೆ
ಪತ್ರಕರ್ತರಿಗೆ ಅಗೌರವ ತೊರಿಸಿದಕ್ಕೆ ಕ್ಷಮೆಯಾಚಿಸಬೇಕು.ಇಲ್ಲದಿದ್ದರೆ ಹೋರಾಟ ಮಾಡಲಾಗುವದೆಂದು ಕಾನಿಪ ಸಂಘ, ರಾಜ್ಯ ಸಂಪಾದಕರ ಸಂಘ, ಅಖಿಲ ಭಾರತೀಯ ಸುರಕ್ಷಾ ಸಮೀತಿಯವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

*ಬಡ ಕಾರ್ಮಿಕ ಮಕ್ಕಳ ಹಿತಕ್ಕಾಗಿ ಉಚಿತ ವಿವಾಹ ನೋಂದಣಿ -ಮೌನೇಶ ಹಳಿಸಗರ* ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘಟನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತವಾಗಿ ಕಳೆದ 3 ವರ್ಷಗಳಿಂದ ಕಾರ್ಮಿಕರ ಹಿತಕ್ಕಾಗಿ ಕಾರ್ಮಿಕರ ಹೇಳ್ಗೆಗಾಗಿ ಮತ್ತು ನಾಡು ನುಡಿ ಜಲಕ್ಕಾಗಿ ಶ್ರಮಿಸುತ್ತಾ ಬಂದಿದೆ. ಈಗ ಮೂರನೇ ವರ್ಷ ಮುಕ್ತಾಯಗೊಂಡು 4ನೇ ವರ್ಷಕ್ಕೆ ಪಾದರ್ಪಣೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಬರುವ ಫೆಬ್ರವರಿ 8ರಂದು ಶಹಾಪುರ ನಗರದ ಹಳಿಸಗರದಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ನಾಡಿನ ಹರ,ಗುರು ಚರಮೂರ್ತಿಗಳು ಹಾಗೂ ರಾಜಕೀಯ ಗಣ್ಯರು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಶಹಾಪೂರ ನಗರ ಹಳಿಸಗರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಂಘವು ಬಡವರ ಮಕ್ಕಳ ಹಿತಕ್ಕಾಗಿ ಈ ಸಂಘಟನೆಯ ಉಚಿತ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ ಹಾಗಾಗಿ ಸಗರ ನಾಡಿನ ಜನತೆಯು ಈ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡುಲು ಇಚ್ಚಿಸುವವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಅವರನ್ನು ಸಂಪರ್ಕಿಸಬಹುದಾಗಿದೆ ತಿಳಿಸಿದ್ದಾರೆ. ಮೌನೇಶ ಹಳಿಸಗರ ಸಂಪರ್ಕಿಸುವ ಕರೆ ಸಂಖ್ಯೆ. 9731520852 -9741142898 *

ಸುದ್ದಿ ಮತ್ತು ಜಾಹಿರಾತುಗಳಿಗಾಗಿ ಸಂಪರ್ಕಿಸಿ : +91 99809 19019
error: Content is protected !!